ಪುಂಗಿ

ನನಗೆ ತಿಳಿದಿಲ್ಲ
ನೀ ಬಲು ದುಬಾರಿ ಎಂದು
ಎಂದೂ ಅನ್ನಿಸಿಲ್ಲ ಹಾಗೆ
ಯಾಕೋ ಗೊತ್ತಿಲ್ಲ, ನಿನ್ನ
ಒಳತೋಟಿಯಲ್ಲಿ ನನ್ನದೇ
ನೆರಳು ಸರಿದಾಡುವುದು
ಎಂಬ ಭ್ರಮೆ.

ಗೊತ್ತು ನಿನ್ನ ಮಿತಿ
ಅಪರಿಮಿತವೆಂದೂ
ಎಂದೂ ನನ್ನೊಂದಿಗೆ ಒಗ್ಗದೆಂದು
ಆದರೂ ಹೃದಯದ ಆರ್ದ್ರತೆಯಲ್ಲಿ
ನನ್ನ ಒಲುಮೆಯ ಹನಿಯು
ನಿನಗೆ ಪ್ರಿಯವೆಂದು.

ಕೆಲವೊಮ್ಮೆ ನಿನ್ನಲ್ಲಿ ಉಕ್ಕುವ
ಜ್ವಾಲಾಮುಖಿ ಶಿಖೆ
ನನ್ನನ್ನೆ ಸುಡಲೆಂದು
ಮತ್ತೆ ತಣ್ಣನೆಯ ಮಂದಾನಿಲ
ಮುದ ಮಾರುತ ಕೂಡ
ನನ್ನ ಅನುರಾಗಕ್ಕೆಂದು

ಬರಬಹುದು ನಿನ್ನಲ್ಲೂ
ಮನೆಯೂಟದ ಬಗ್ಗೆ
ತಾತ್ಸಾರ
ಹೊರಗಿನೂಟದ ಆಸೆ
ಪರಿಮಳದ ಉನ್ಮತ್ತತೆಗೆ

ಆದರೂ ನನಗೆ ಗೊತ್ತು
ನಿನ್ನ ಪುಂಗಿ ಹಾಗೆಲ್ಲ
ಬಾರಿಸದೆಂದೂ,
ಅದಕ್ಕೆ ಕುಣಿಯುವ ನಾಗ
ನಾನೇ ಆಗಬೇಕೆಂದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿದ್ವಾರ
Next post ಕನ್ನಡಿ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys